App logo

R.D Venkatesh

@dodmanetlkp

37

friends

ಈ ಪೃಥ್ವಿಯಲ್ಲಿ ಜನಿಸಿದ ಮೇಲೆ ಏನಾದರೊಂದು ಸಾಧಿಸಲೇಬೇಕು. ಸಾಧನೆಯ ಹಾದಿ ಬಲು ಕಠಿಣ. ಸುಖದ ಅನುಭವವಾಗಬೇಕಾದರೆ ಕಷ್ಟವನ್ನು ನೋಡಿರಬೇಕು. ಜ್ಞಾನ-ಅಜ್ಞಾನ, ಕಷ್ಟ-ಸುಖ, ಏಳು-ಬೀಳು, ದುಃಖ-ಸಂತಸ, ರಾಗ-ದ್ವೇಶ, ನೈತಿಕ-ಅನೈತಿಕ ಇವುಗಳ ನಿಯಂತ್ರಣ ಸಾಧ್ಯವಾಯಿತೆಂದರೆ ಬದುಕು ಪಕ್ವವಾಗುವುದು ನಿಶ್ಚಿತ. ಬದುಕಿನ ಗುರಿ ಸದಾ ನೆನಪಿನಲ್ಲಿರಬೇಕು. ಓದಿದ್ದು: DME, BE (Mech), MBA(Mktg), MA (Journalism), PGD (Tourism) and 10 professional courses. ವೃತ್ತಿ: Engineer & Horticulturist. Fortunate to work with more than 12 Mechanical & Software organisations at Bengaluru & USA. Toured throughout Bharath on professional visits. ಪ್ರವೃತ್ತಿ: Freelance Journalism, literature & Art Painting. ಸಾಹಿತ್ಯ : Published 3 Kannada Books as Editor. Written more than 80 Articles for Kasturi, Sudha, Taranga, Vishwavani, Vijaya Karnataka & Kannada Prabha. Authored stories, poems & political satires. Lucky to appear in more than 32 News papers & Magazines ಇಷ್ಟಪಡುವ ಕ್ರೀಡೆ : Cricket, Chess, Carrom, Badminton & Swimming. ಇಷ್ಟವಾದ ಪುಸ್ತಕಗಳು: Amar Chitra Katha series. ಇಷ್ಟವಾಗುವ ಲೇಖಕರು: Long list but mainly; DVG, Vishveshwar Bhat, Niranjan Vanalli, Pranesh, Ravi Belagere, Hu Ve Sheshadri, Pratap Simha, Gundu Rao... ಇಷ್ಟವಾದ ಸಿನೆಮಾ: Sholay, Nagara Havu, Bhandana, Manasa Sarovara, Bangarada Manushya, Om, Minchina Ota... ಇಷ್ಟವಾಗುವ ಬೇರೆ ವಿಷಯಗಳು: Religion, Culture, Music & Spirituality... ಬದುಕಿನ ಸಾರ್ಥಕ ಕ್ಷಣಗಳು: During saving 3 persons & while donating blood for more than 20times. ಬದುಕಿನ ಸಾಧನೆ : Nothing yet, learning from everyone - every minute. –----------------- ಬದುಕಿನ ಅನಿರೀಕ್ಷಿತ ಕ್ಷಣಗಳು 1. ಎಂಟನೇ ತರಗತಿಯಲ್ಲಿದ್ದಾಗ ನನ್ನ ವಿಜ್ಞಾನದ ಮಾಡೆಲ್ ಗೆ zonal level ಪ್ರಶಸ್ತಿ ಬಂದಾಗ ಅದಕ್ಕೆ ನಾನು ಅರ್ಹನಾ? ಅನಿಸಿದ್ದು ನಿಜ. 2. ಕ್ರಿಕೆಟ್ ಹುಚ್ಚಿನಿಂದಾಗಿ ನಾನು SSLC ತೇರ್ಗಡೆಯಾಗಿದ್ದೇ ಹೆಚ್ಚು! 3. ಅಂತಿಮ ಇಂಜಿನಿಯರಿಂಗ್ ಪ್ರಾಜೆಕ್ಟ್ ಮಾಡೆಲನ್ನು ಕರ್ನಾಟಕ ವಿಜ್ಞಾನ ಮಂಡಳಿಯವರು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ಕೊಟ್ಟಾಗ 'ನನಗೂ ಪ್ರಶಸ್ತಿ ಬರುತ್ತದೆಯೇ?' ಅನಿಸಿದ್ದೂ ನಿಜವೆ. 4. ಕೆಲಸ ಸಿಗದಿದ್ದಾಗ ಸೈಕಲ್ ಓಡಿಸಿ ಪೇಪರ್, ಹಾಲು ಹಾಕಿದಾಗ ಸಂಬಳ ತಿಂಗಳಿಗೆ 60/- 5. ಕೆಲಸ ಸಿಕ್ಕಮೇಲೆ ಮೊದಲ ತಿಂಗಳ ಸಂಬಳ 200/-, ಎರಡನೆ ತಿಂಗಳು 250/- ಮೂರನೆ...450/- ವರ್ಷವಾಗುವಷ್ಟರಲ್ಲಿ 1200/-. ಆಗ ಒಂದು ಕೆಜಿ ಅಕ್ಕಿಗೆ 5/-. 6.ಅಮೇರಿಕಾದಲ್ಲಿ ಕಾರು ಖರೀದಿಸಿ ಓಡಿಸುವಾಗ ಇದೆಲ್ಲಾ ಕನಸಾ-ನಿಜವಾ? ಅಂತ ಚಿವುಟಿಕೊಂಡಿದ್ದೂ ಇದೆ! 7. ನನ್ನ 21ನೆಯ ವಯಸ್ಸಿನಲ್ಲಿ ಮೊಟ್ಟಮೊದಲ ಲೇಖನ ಕಸ್ತೂರಿಯಲ್ಲಿ ಪ್ರಕಟವಾಗಿದ್ದನ್ನು ಬೇರೆಯವರು ತೋರಿಸಿದಾಗ ಆದ ಆನಂದ ಅವರ್ಣನೀಯ. 8. ಹವ್ಯಕ ಭಾಷೆಗೆ 'ಹವಿಗನ್ನಡ' ಎಂಬ ಹೆಸರನ್ನು ನನ್ನ ಕವನದಿಂದ ಆರಿಸಿಕೊಂಡು ಶ್ರೀ ಹವ್ಯಕ ಮಹಾಸಭಾದವರು ಸನ್ಮಾನ ಮಾಡಿದ್ದು ನನ್ನ ಸಂತಸದ ಕ್ಷಣ. 9. ಆದರೆ, ಕ್ರಿಕೆಟ್, ಚೆಸ್, ಕೇರಂ ಟೂರ್ನಿಗಳಲ್ಲಿ, ಕವನ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಬಂದಾಗ, ಟಿವಿ ಚರ್ಚೆಗಳಲ್ಲಿ ಭಾಗವಹಿಸಿದಾಗ ಇಷ್ಟೇನಾ? ಅನಿಸಿದ್ದೂ ಸತ್ಯವೇ!